ಭಾನುವಾರ, ಮೇ 1, 2011

ಸಂಸ್ಕೃತ ಹಬ್ಬ


ನಿನ್ನೆ [೧.೫.೨೦೧೧] ಹಾಸನದ ಪೇಟೆಬೀದಿಗಳಲ್ಲಿ ಸಂಸ್ಕೃತದ ಹಬ್ಬ. ಸಂಸ್ಕೃತ ಭಾರತಿಯ ಪ್ರಾಂತ ಮಟ್ಟದ ಶಿಕ್ಷಕ ಪ್ರಶಿಕ್ಷಣ ವರ್ಗದ ಸಮಾರೋಪ ದಿನವಾದ ಅಂದು ನಗರದ ಹಾಸಾಂಬ ಪ್ರದೇಶ ಮತ್ತು ಪೇಟೆ ಬೀದಿಯಲ್ಲಿ ನಡೆದ ಶೋಭಾಯಾತ್ರೆಯು ಜನರ ಮೆಚ್ಚುಗೆ ಪಡೆಯಿತು. ಉತ್ಸಾಹದ ವಾತಾವರಣದಲ್ಲಿ ನಡೆದ ಶೋಭಾಯಾತ್ರೆಯ ಕೆಲವು ಚಿತ್ರಗಳು ಮತ್ತು ನಂತರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಶ್ರೀಮತೀ ಶಾಂತಾಶಾಸ್ತ್ರಿ, ಅವರ ಭಾಷಣದ ಧ್ವನಿಯನ್ನು ಇಲ್ಲಿ ಪ್ರಕಟಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಭಾಗವನ್ನು ಪ್ರಕಟಿಸಲಾಗುವುದು.