ಶುಕ್ರವಾರ, ಏಪ್ರಿಲ್ 22, 2011

ಮನವಿ


              ವೈಜ್ಞಾನಿಕವಾಗಿ ನಮ್ಮ ದೇಶವು ಮುನ್ನಡೆಸಾಧಿಸಿದ್ದರೂ ಕೂಡ  ಸಮಾಜದ ಸ್ವಾಸ್ಥ್ಯಕ್ಕೆ  ದಿನದಿಂದ ದಿನಕ್ಕೆ ಪೆಟ್ಟುಬೀಳುತ್ತಿರುವುದು  ಸಮಾಜದ ಬಗ್ಗೆ ಕಳಕಳಿ ಇರುವ ಎಲ್ಲರಿಗೂ ಆತಂಕದ ವಿಷಯವಾಗಿದೆ.
ಆದ್ದರಿಂದ ಸಾಮಾಜಿಕ ಸ್ವಾಸ್ಥ್ಯಕಾಪಾಡುವ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಅತೀ ಅಗತ್ಯವಾಗಿದೆ. ನಮ್ಮ ಸಂಸ್ಕೃತಿ-ಪರಂಪರೆಗಳ ಬಗ್ಗೆ ಸರಿಯಾದ ಅರಿವಿನ ಕೊರತೆಯೇ ಇಂದಿನ ಸಮಾಜದ ದು:ಸ್ಥಿತಿಗೆ ಕಾರಣವೆಂಬುದು ಸುಳ್ಳಲ್ಲ.ಸಂಸ್ಕೃತ ಭಾಷೆಯು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ನಮ್ಮ ದೇಶದ ಹಾಗೂ ಕೆಲವು ಹೊರದೇಶಗಳ ಹಲವು ಭಾಷೆಗೆ ಜನ್ಮ ಕೊಟ್ಟಂತಹ ಮಾತೃ ಭಾಷೆಯಾಗಿದೆ. ಅತ್ಯಂತ ಮಧುರವೂ ಸರಳವೂ ಆಗಿರುವ  ಸಂಸ್ಕೃತ ಭಾಷೆಯ ಬಗ್ಗೆ ಅದೊಂದು ಕಠಿಣವಾದ ಭಾಷೆಯೆಂದು ಬೆಳೆದಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕಾಗಿದೆ. ಅದಕ್ಕಾಗಿ  ಸಂಸ್ಕೃತದ ಸರಳ  ಸಂಭಾಷಣೆಯ ಮೂಲಕ ಸಂಸ್ಕೃತದ  ಅರಿವನ್ನು ಮೂಡಿಸಿ ತನ್ಮೂಲಕ  ನಮ್ಮ ಸಂಸ್ಕೃತಿ-ಪರಂಪರೆಗಳ ಸರಿಯಾದ ಪರಿಚಯವನ್ನು ಇಂದಿನ ಪೀಳಿಗೆಗೆ ಮಾಡಿಸಲು ಸಂಸ್ಕೃತ ಭಾರತಿಯು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ದಿಸೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ|| ಡಿ. ವೀರೇಂದ್ರಹೆಗ್ಗಡೆಯವರ ಮಾರ್ಗದರ್ಶದ ಮೇರೆಗೆ  ದಿನಾಂಕ 2.4.2011 ರಿಂದ 1.5.2011 ರವರಗೆ ಕರ್ನಾಟಕ ರಾಜ್ಯಮಟ್ಟದ ಸಂಸ್ಕೃತ ಶಿಕ್ಷಕ ಪ್ರಶಿಕ್ಷಣವರ್ಗವು ಹಾಸನ ನಗರದ ಶ್ರೀ ಧರ್ಮಸ್ಥಳ ಮಂಜುನಾಥ ಆಯುರ್ವೇದ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವುದು ಹಾಸನದ ಜನತೆಗೆ ಅಭಿಮಾನದ  ವಿಷಯವಾಗಿದೆ.
·         ಶಿಬಿರದಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ಸುಮಾರು 150 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದು ಶಿಬಿರಾರ್ಥಿಗಳಿಗೆ ಶಿಕ್ಷಣ ನೀಡಲು ರಾಜ್ಯದ ನಾನಾ ಭಾಗಗಳಿಂದ ಹಾಗೂ ಹೊರರಾಜ್ಯಗಳಿಂದ ಸುಮಾರು 40 ಜನ ವಿದ್ವಾಂಸರುಗಳು ಬಂದು ಶಿಕ್ಷಣವನ್ನು ನೀಡಲಿದ್ದಾರೆ.
·         ನಮ್ಮ ವೈಜ್ಞಾನಿಕ ಪರಂಪರೆಯನ್ನು ಬಿಂಬಿಸುವ ಸಂಸ್ಕೃತ ವಿಜ್ಞಾನ ಪ್ರದರ್ಶಿನಿಯು ಶಿಬಿರದ ಮುಖ್ಯವಾದ ಆಕರ್ಷಣೆಯಲ್ಲಿ ಒಂದಾಗಿರುತ್ತದೆ.
·         ಕೇವಲ ಹತ್ತು ದಿನಗಳಲ್ಲಿ  ಸಂಸ್ಕೃತದಲ್ಲಿ ಮಾತನಾಡಲು ಕಲಿಸುವ ಸಂಭಾಷಣಾ ಶಿಬಿರವು ಹಾಸನ ನಗರದ ನಾಲ್ಕು ಕಡೆಗಳಲ್ಲಿ  ಇದೇ ಸಮಯದಲ್ಲಿ ನಡೆಯಲಿವೆ.
·         ಶಿಬಿರದ ಕಡೆಯದಿನವಾದ 1.05.2011 ಭಾನುವಾರ ದಂದು ಮಧ್ಯಾಹ್ನ 3.30ಕ್ಕೆ ನಗರದ ಹಾಸನಾಂಭ ದೇವಾಲಯದಿಂದ ಹೊರಡುವ ಶೋಭಾಯತ್ರೆಯು ಶ್ರೀ ಗಣಪತಿ ದೇವಾಲಯ, ಗಾಂಧಿಬಜಾರ್,ನರಸಿಂನರಾಜ ವೃತ್ತ ,ಹೇಮಾವತಿ ಪ್ರತಿಮೆ ಮತ್ತು ಮಹಾವೀರ ವೃತ್ತದ ಮೂಲಕ ಕನ್ನಡಸಾಹಿತ್ಯಪರಿಷತ್ ಆವರಣವನ್ನು ಸೇರುತ್ತದೆ.
·         ಅಂದು ಸಂಜೆ 5.00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಸಾರ್ವಜನಿಕ ಸಮಾರಂಭವು ನಡೆಯಲಿದೆ.
ಸಂಸ್ಕೃತ ಭಾರತಿಯ ಚಟುವಟಿಕೆಗಳ ಸಂಕ್ಷಿಪ್ತ ಮಾಹಿತಿ
1]ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ,13 ಹೊರದೇಶಗಳಲ್ಲೂ, ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಸ್ಕೃತ ಚಟುವಟಿಕೆಗಳು.
2] 1984 ರಲ್ಲಿ ಆರಂಭಗೊಂಡ ಸಂಸ್ಕೃತ ಭಾರತಿಯಿಂದ ಈವರಗೆ ಸುಮಾರು ಒಂದು ಲಕ್ಷ ಶಿಬಿರಗಳು. ಸುಮಾರು ಎರಡುಕೋಟಿ ಜನರಿಗೆ  ನಡೆಸಿದ ಸರಳ ಸಂಸ್ಕೃತ ಸಂಸ್ಕೃತ ಸಂಭಾಷಣಾ ಶಿಬಿರಗಳು.
3]ಹಳ್ಳಿಯ ರೈತನಿಂದ ದಿಲ್ಲಿಯ ಸಂಸತ್ತಿನವರೆಗೂ  ಸಂಭಾಷಣಾ ಶಿಬಿರ ನಡೆಸಿರುವ ಹೆಗ್ಗಳಿಕೆ.
4] ಭಾರತದ ಸಂಸ್ಕೃತಿಯ ಬೇರುಗಳಾದ ಭಗವದ್ಗೀತೆ, ರಾಮಾಯಣ ಮಹಾಭಾರತಗಳ ಪರಿಚಯ ಕಾರ್ಯಕ್ರಮಗಳು
5]ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ವರ್ಧಿಸಬಲ್ಲ ಸಂಸ್ಕೃತ ಸುಭಾಷಿತಗಳನ್ನು  ಕಲಿಸುವ ಶಿಬಿರಗಳ ಆಯೋಜನೆ.
6] ಸಂಸ್ಕೃತದಲ್ಲಿಯೇ ಆಟಗಳು,ಭಾಷಣಕಲೆ, ಚರ್ಚಾಸ್ಪರ್ಧೆಗಳು, ಬೀದಿನಾಟಕಗಳ ಆಯೋಜನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ